Search This Blog

Wednesday, 9 September 2015

ಕವಿತೆ-ಒರತೆ

ದುಃಖತಪ್ತ ಹೃದಯಕೆ
ತಂಪೆರೆವ ಸಾಧನ|
ಸ್ನೇಹವೆಂಬ ಒಂದು ಹನಿ
ಸಿಹಿನೀರಿನ ಸಿಂಚನ||

ಬಯಸಿದ್ದು ಸ್ನೇಹದ 
ಸಿಹಿ ನೀರು|
ದೊರಕಿದ್ದು ಉಕ್ಕಿಬಹ
ಉಪ್ಪು ನೀರು||

ಸ್ನೇಹಭಾವದಿ ಕುಳಿತು
ಬರೆಯುತಿರೆ ಕವಿತೆ|
ಮಂಜಾದ ನಯನಗಳು
ಉಪ್ಪುನೀರಿನ ಒರತೆ||

ಗೆಳೆತನದ ಬಯಕೆಯಲಿ
ಮುಂದೆ ಕೈಚಾಚಿರೆ|
ಒಡ್ಡಿದ ಕರಗಳಿಗೆ
ಗಾಯವಾಗದ ಬರೆ||

ರವಿ-ಶಶಿಯರು ಮಂಕಾದರೂ
ಪೃಥ್ವಿಗೆ ಪ್ರಳಯವಾದರೂ|
ಹಸನಾಗಿರಲಿ ತವ ಜೀವನ
ಹರಸುವ ಹಾರೈಕೆ ಈ ಕವನ||

No comments:

Post a Comment